ಯಾದಗಿರಿ, ಸೆ. ೨೪:- ಯಾದಗಿರಿ ನಗರದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ 18.91 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಯಾದಗಿರಿ ಶಾಸಕ ಚನ್ನಾರೆಡ್ಡಿ ತುನ್ನೂರ ತಿಳಿಸಿದ್ದಾರೆ. ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2024-25ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯ (ಕೆ.ಕೆ.ಆರ್.ಡಿ) ಮ್ಯಾಕ್ರೋ ಅನುದಾನದಡಿಯಲ್ಲಿ 3 ಪ್ರಮುಖ ಕಾಮಗಾರಿಗಳಿಗೆ 8 ಕೋಟಿ ರೂ., ಕೆಆರ್ಐಡಿಎಲ್ನ 4 ಕಾಮಗಾರಿಗಳಿಗೆ 5.10 ಕೋಟಿ ರೂ., ಹಾಗೂ 2023-24ನೇ ಸಾಲಿನ ಸಿಎಂಕ್ಯೂ ಯೋಜನೆಯಡಿಯಲ್ಲಿ 3 ಕಾಮಗಾರಿಗಳಿಗೆ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ರೈಲ್ವೆ ಹಾಗೂ ಭೀಮಾ ನದಿಯ ಬ್ರಿಡ್ಜ್ ರಸ್ತೆಯ ತಾತ್ಕಾಲಿಕ ದುರಸ್ತಿ ಕಾಮಗಾರಿಗಳಿಗೆ 2 ಕೋಟಿ ರೂ. ಅನುದಾನ ಸಹ ಧಾರವಾಹಿಕವಾಗಿ ಬಿಡುಗಡೆ ಮಾಡಲಾಗಿದೆ. ವಡಗೇರಾ ಭಾಗದಲ್ಲಿ ನಡೆಯುತ್ತಿರುವ 7 ಪ್ರಮುಖ ಕಾಮಗಾರಿಗಳಲ್ಲಿ 5 ಮುಗಿದಿದ್ದು, 2 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಶಾಸಕರು ವಿವರಿಸಿದರು.
ಮುಡಾ ಹಗರಣ ಕುರಿತು ಮಾತನಾಡಿದ ಅವರು, ಹೈಕೋರ್ಟ್ ತೀರ್ಪನ್ನು ಸಂಪೂರ್ಣವಾಗಿ ಗೌರವಿಸುತ್ತೇವೆ. ಹೈಕಮಾಂಡ್ ಮತ್ತು ಸಂಪುಟದ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು. ದಲಿತ ಮುಖ್ಯಮಂತ್ರಿ ಕುರಿತು ಮಾತನಾಡುವಾಗ, ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಹುದ್ದೆಗೆ ಆಸೆ ವ್ಯಕ್ತಪಡಿಸುವ ಕುರಿತು ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದರು.
- ಅಕ್ರಮ ಬೀಜ ರಸಗೊಬ್ಬರ ಮಾರಾಟ ತಡೆಯುವಂತೆ:ಮಲ್ಲಣ್ಣ ಒತ್ತಾಯ
- ಪ್ರಧಾನಿ ಮೋದಿ ಕರೆಗೆ ಓಗೊಟ್ಟು – ಇಂಧನ ಉಳಿತಾಯ ಹಾಗೂ ಪರಿಸರ ಸಂರಕ್ಷಣೆ, ವೈಭವದ ಜನ್ಮ ದಿನಾಚರಣೆಗೆ ಬ್ರೇಕ್: ಶ್ರೀಧರ ಸಾಹುಕಾರ
- ಜಿಲ್ಲಾ ಕೋಲಿ ಮತ್ತು ಕಬ್ಬಲಿಗ ಸಮಾಜದಿಂದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಿಗೆ ಸನ್ಮಾನ
- ಅಂಗ್ಲ ಬ್ಯಾನರ್ ಗಳ ತೆರವಿಗೆ ಕ್ರಮ ಕೈಗೊಳ್ಳದಿದ್ದರೆ ಕರವೇ ಕಾರ್ಯಕರ್ತರೇ ತೆರವು ಮಾಡಲಿದ್ದಾರೆ: ಹತ್ತಿಮನಿ ಎಚ್ಚರಿಕೆ
- ಯಾದಗಿರಿ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ರಾಹುಲ್ ಟಿ. ಪಾಂಡ್ವೆ ನೇಮಕ

