Mon. Dec 1st, 2025

ಮೋದಿ ಭೇಟಿಯಾದ ದಳಪತಿಗಳು,ಕರ್ನಾಟಕದಲ್ಲಿ ಶಿಂಧೆ- ಪವಾರ್ ಇಬ್ಬರೂ ಇದ್ದಾರೆ:ಕುಮಾರಸ್ವಾಮಿ

ಮೋದಿ ಭೇಟಿಯಾದ ದಳಪತಿಗಳು,ಕರ್ನಾಟಕದಲ್ಲಿ ಶಿಂಧೆ- ಪವಾರ್ ಇಬ್ಬರೂ ಇದ್ದಾರೆ:ಕುಮಾರಸ್ವಾಮಿ

ಡಿ ೨೧:ಬಿಜೆಪಿ ಜೊತೆ ಮೈತ್ರಿ ಘೋಷಣೆಯಾದ ಬಳಿಕ ಹೆಚ್‌.ಡಿ. ದೇವೇಗೌಡ ಅವರು ಮೊದಲ ಬಾರಿಗೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಹೆಚ್‌ಡಿಗೆ ಕುಮಾರಸ್ವಾಮಿ ಹಾಗೂ ಹೆಚ್.ಡಿ.ರೇವಣ್ಣ ಸಾಥ್ ನೀಡಿದ್ದಾರೆ. ದಳಪತಿಗಳ ಜೊತೆಗಿನ ಫೋಟೋಗಳನ್ನು ಮೋದಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ದೇವೇಗೌಡರನ್ನು ಭೇಟಿಯಾಗಲು ಯಾವಾಗಲೂ ಸಂತೋಷವಾಗುತ್ತದೆ. ರಾಷ್ಟ್ರದ ಪ್ರಗತಿಗೆ ದೇವೇಗೌಡರ ಅನುಕರಣೀಯ ಕೊಡುಗೆಯನ್ನು ಭಾರತವು ಬಹಳವಾಗಿ ಗೌರವಿಸುತ್ತದೆ ಎಂದು ಮೋದಿ ಬರೆದುಕೊಂಡಿದ್ದಾರೆ

ದೆಹಲಿಯ ಸಂಸತ್ ಭವನದಲ್ಲಿ  ಇಂದು ಮಾಜಿ ಪ್ರಧಾನಿ ಎಚ್.ಡಿ  ದೇವೇಗೌಡ  ಪುತ್ರರಾದ ಎಚ್.ಡಿ  ಕುಮಾರಸ್ವಾಮಿ ಮತ್ತು  ಎಚ್.ಡಿ  ರೇವಣ್ಣ ಅವರ  ಜೊತೆ ಪ್ರಧಾನಿ ಮೋದಿ ಭೇಟಿಯಾಗಿದ್ದಾರೆ.

ಈ ವಿಚಾರವನ್ನು ಪ್ರಧಾನಿ ಮೋದಿ ಎಕ್ಸ್ ( ಟ್ವಿಟರ್ ) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಷ್ಟ್ರದ ಪ್ರಗತಿಗೆ ದೇವೇಗೌಡ ಜಿ ಅವರ ಅನುಕರಣೀಯ ಕೊಡುಗೆಯನ್ನು ಭಾರತವು ಬಹಳವಾಗಿ ಗೌರವಿಸುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ.

ಕರ್ನಾಟಕದಲ್ಲಿ ಶಿಂಧೆ- ಪವಾರ್ ಇಬ್ಬರೂ ಇದ್ದಾರೆ

ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಕರ್ನಾಟದ ರಾಜಕೀಯದಲ್ಲಿ ಮಹಾರಾಷ್ಟ್ರದ ರಾಜಕೀಯ ಕ್ರಾಂತಿ ಮಾಡಿದ ಏಕನಾಥ್ ಶಿಂಧೆ ಹಾಗೂ ಅಜಿತ್ ಪವಾರ್ ಸಹ ಇದ್ದಾರೆ ಎಂದು ಹೇಳಿದರು. ಈ ಇಬ್ಬರಲ್ಲಿ ಯಾರು ಮೊದಲು ಮುಂದೆ ಬರುತ್ತಾರೆ ನೋಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಏನ್ ಬೇಕಾದರೂ ಆಗಬಹುದು. ಲೋಕಸಭಾ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರವನ್ನು ನಾವು ಗೆಲ್ಲಬೇಕು. ಸೀಟು ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ತಿಳಿಸಿದರು

Related Post

Leave a Reply

Your email address will not be published. Required fields are marked *

error: Content is protected !!