ಬೆಂಗಳೂರು, ಫೆಬ್ರವರಿ 19
ನಗರದ ಡಾ. ಸುನಿಲ್ ಕುಮಾರ್ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಮಹಿಳೆಯೊಬ್ಬರು ಪರಿಚಯವಾಗಿದ್ದರು. ಈ ಮೂಲಕ ಅವರು ವೈದ್ಯರ ಮೊಬೈಲ್ ಸಂಖ್ಯೆ ಪಡೆಯಲಾಗಿದ್ದು, ನಂತರ ವಾಟ್ಸಾಪ್ ಮೂಲಕ ಸಂಪರ್ಕ ಸಾಧಿಸಿದ್ದರು. ಫೆಬ್ರವರಿ 17 ರಂದು ಮಹಿಳೆ, ತನ್ನ ಅತ್ತೆಯನ್ನು ಸಾಯಿಸಲು ಸಹಾಯ ಮಾಡಬೇಕೆಂದು ಅಚ್ಚರಿಯ ಸಂದೇಶ ಕಳುಹಿಸಿದ್ದಾರೆ.
ಶಾಕ್ ಆದ ವೈದ್ಯರು, ಮಹಿಳೆಯ ಸಂದೇಶ ಹೀಗಿತ್ತು:
ಮಹಿಳೆ: ವಿಚಾರ ಹೇಳಿದ್ರೆ ಬೈತೀರಾ ಅನಿಸುತ್ತೆ
ವೈದ್ಯ: ಹೇಳಿ
ಮಹಿಳೆ: ಭಯ ಆಗ್ತಾ ಇದೆ ಹೇಳಕ್ಕೆ
ವೈದ್ಯ: ಹೇಳಿ
ಮಹಿಳೆ: ಸಾಯಿಸುವ ವಿಚಾರ, ಹೇಗೆ ಸಾಯಿಸುವುದು ಅಂತ
ವೈದ್ಯ: ಯಾರನ್ನ?
ಮಹಿಳೆ: ಅತ್ತೆನ
ವೈದ್ಯ: ಯಾಕೆ?
ಮಹಿಳೆ: ತುಂಬಾ ಹಿಂಸೆ ಕೊಡ್ತಾ ಇದ್ದಾರೆ, ಅದಕ್ಕೆ ನಿಮ್ಮನ್ನು ಕೇಳೋಣ ಅಂತ. ಏನಾದ್ರೂ ಹೇಳ್ತೀರಾ ಹೇಗೆ ಸಾಯಿಸೋದು ಅಂತ. ಪ್ಲೀಸ್ ಹೇಳಿ. ತುಂಬಾ ಏಜ್ ಆಗಿದೆ.
ವೈದ್ಯ: ನಾವು ಪ್ರಾಣ ಉಳಿಸೋ ಜನ
ಮಹಿಳೆ: ಟ್ಯಾಬ್ಲೆಟ್ ಇರುತ್ತಲ್ಲ ಅದು ಹೇಳಿ. ಒಂದು, ಎರಡು ತಗೊಂಡ್ರೆ ಸಾಯ್ತಾರಲ್ಲ ಆತರ ಇಲ್ವಾ?
ಈ ಮಾತುಕತೆಯ ಬಳಿಕ ಶಾಕ್ ಆದ ವೈದ್ಯರು ಮಹಿಳೆಯ ಇರಾದೆ ಕಂಡು ಬೆಚ್ಚಿಬಿದ್ದಿದ್ದಾರೆ. ಆದರೆ ಮಹಿಳೆ ತಕ್ಷಣವೇ ಈ ಸಂದೇಶಗಳನ್ನು ಡಿಲೀಟ್ ಮಾಡಿ, ವೈದ್ಯರ ಮೊಬೈಲ್ ನಂಬರನ್ನು ಬ್ಲಾಕ್ ಮಾಡಿದ್ದಾಳೆ.
ಪೊಲೀಸ್ ಠಾಣೆಗೆ ದೂರು ನೀಡಿದ ವೈದ್ಯರು
ಈ ಅಘಟನೆಯ ಕುರಿತು ತಕ್ಷಣವೇ ಡಾ. ಸುನಿಲ್ ಕುಮಾರ್ ಸಂಜಯನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ವೈದ್ಯರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, “ಮಹಿಳೆ ನನ್ನನ್ನು ಮೆಸೇಜ್ ಮಾಡಿ, ಅತ್ತೆಯನ್ನು ಕೊಲ್ಲಲು ಮಾತ್ರೆ ಕೇಳಿದ್ರು. ನಾನು ಶಾಕ್ ಆಗಿ, ಪ್ರಶ್ನೆ ಮಾಡುತ್ತಿದ್ದಂತೆಯೇ, ಎಲ್ಲಾ ಸಂದೇಶಗಳನ್ನು ಡಿಲೀಟ್ ಮಾಡಿದರು. ಆದರೆ ಅದಕ್ಕೂ ಮೊದಲು ನಾನು ಸ್ಕ್ರೀನ್ಶಾಟ್ ತೆಗೆದುಕೊಂಡಿದ್ದೆ. ಈ ಎಲ್ಲಾ ಪುರಾವೆಗಳೊಂದಿಗೆ ದೂರು ದಾಖಲಿಸಿದ್ದೇನೆ” ಎಂದು ತಿಳಿಸಿದ್ದಾರೆ.
ಷಡ್ಯಂತ್ರವೋ? ಟ್ರ್ಯಾಪ್ Attempt ಆಗಿದೆಯಾ?
ಈ ಘಟನೆಯ ಬಗ್ಗೆ ಹೆಚ್ಚಿನ ಅನುಮಾನ ವ್ಯಕ್ತಪಡಿಸಿರುವ ವೈದ್ಯರು, “ಮಹಿಳೆ ಈ ಸಂದೇಶ ನಿಜವಾಗಿಯೂ ಕಳುಹಿಸಿದ್ದಾರಾ ಅಥವಾ ಇದು ನನಗೆ ಒರೆಸಿ ಮಾಡಲಾದ ಷಡ್ಯಂತ್ರವೋ ಎಂಬ ಅನುಮಾನ ಇದೆ. ನಾನು ರಾಜಕೀಯ ಹಾಗೂ ಸಾಮಾಜಿಕವಾಗಿ ಸಕ್ರಿಯನಾಗಿದ್ದೇನೆ. ಈ ಹಿಂದೆ ವಿಜಯಪುರದಲ್ಲಿ ಶಾಸಕ ಚುನಾವಣೆಗೆ ಸ್ಪರ್ಧಿಸಿದ್ದೆ. ಇದೊಂದು ಉದ್ದೇಶಿತ ಚಾಳಿಯಾಗಿ ಇರಬಹುದು” ಎಂದು ಹೇಳಿಕೊಂಡಿದ್ದಾರೆ.
ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಹಿಳೆ ನಿಜವಾಗಿಯೂ ಈ ಕೃತ್ಯಕ್ಕೆ ಪ್ರಯತ್ನಿಸಿದ್ದರಾ ಅಥವಾ ಇದೊಂದು ಕಾವಲು ಕತೆ ಆಗಿರಬಹುದಾ ಎಂಬ ಪ್ರಶ್ನೆಗಳು ಮೂಡಿವೆ. ಮುಂದಿನ ದಿನಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಲಭ್ಯವಾಗುವ ನಿರೀಕ್ಷೆಯಿದೆ.