ಯಾದಗಿರಿ, ಮೇ 15: ಭಾರತ – ಪಾಕಿಸ್ತಾನ ನಡುವೆ ಯುದ್ಧ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಾಗರಿಕರ ರಕ್ಷಣೆಗೆ ಮುನ್ನೆಚ್ಚರಿಕೆಯ ಕ್ರಮವಾಗಿ ಯಾದಗಿರಿ ಜಿಲ್ಲೆಯ ಜಿಲ್ಲಾಡಳಿತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಸಂಬಂಧ ಮೇ 18ರಂದು ಸಂಜೆ 4 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅಣಕು ಪ್ರದರ್ಶನ (ಮಾಕ್ ಡ್ರಿಲ್) ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಮಾನ್ಯ ಮುಖ್ಯಮಂತ್ರಿಗಳಿಂದ ನೀಡಲಾದ ನಿರ್ದೇಶನದಂತೆ ನಾಗರಿಕರಲ್ಲಿ ಸುರಕ್ಷಿತ ಹಾಗೂ ಜಾಣತನದಿಂದ ನಿಭಾಯಿಸುವ ಸಾಮರ್ಥ್ಯ ಬೆಳೆಯಿಸಲು ಈ ಮಾಕ್ ಡ್ರಿಲ್ ಆಯೋಜಿಸಲಾಗಿದೆ. ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಈ ಕಾರ್ಯಚಟುವಟಿಕೆಗೆ ನೇಮಿಸಿ, ನಿರ್ದಿಷ್ಟ ಜವಾಬ್ದಾರಿಗಳನ್ನು ನೀಡಲಾಗಿದೆ.
ನೋಡಲ್ ಅಧಿಕಾರಿಗಳು ಎಂದು ಯಾದಗಿರಿ ಸಹಾಯಕ ಆಯುಕ್ತರಾದ ಶ್ರೀ ಹಂಪಣ್ಣ ಸಜ್ಜನ್ (8722014680) ಹಾಗೂ ಯಾದಗಿರಿ ತಹಸೀಲ್ದಾರರಾದ ಶ್ರೀ ಸುರೇಶ ಅಂಕಲಗಿ (9901112994) ಅವರನ್ನು ನೇಮಕ ಮಾಡಲಾಗಿದೆ.
ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಪ್ರಮುಖ ಅಧಿಕಾರಿಗಳು ಈ ಕೆಳಗಿನಂತಿವೆ:
- ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರು: ಶ್ರೀ ಅಭಿಮನ್ಯು (9448456958)
- ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ: ಶ್ರೀ ಪ್ರಕಾಶ ಕುಲಕರ್ಣಿ (9448349742)
- ಜೆಸ್ಕಾಂ ಉಪ ವಿಭಾಗ ಎಇಇ: ಶ್ರೀ ರಾಘವೇಂದ್ರ (9448359018)
- ಅಗ್ನಿಶಾಮಕ ಇಲಾಖೆಯ ಜಿಲ್ಲಾ ಅಧಿಕಾರಿ: ಶ್ರೀ ವಿರೇಶ (9880682568)
- ಆರೋಗ್ಯ ಇಲಾಖೆಯ ಜಿಲ್ಲಾ ಅಧಿಕಾರಿ: ಡಾ. ಮಹೇಶ್ (9448568187)
- ಜಿಲ್ಲಾ ಶಸ್ತ್ರಚಿಕಿತ್ಸಕರು: ಡಾ. ರಿಜ್ವಾನಾ ಆಫ್ರಿನ್ (9591634732)
- ಪೌರಾಯುಕ್ತರು: ಶ್ರೀ ಉಮೇಶ್ ಚವ್ಹಾಣ (9900920400)
- ಡಿಆರ್ ಘಟಕ ಉಪಾಧೀಕ್ಷಕರು: ಶ್ರೀ ಭರತ ಜಿ. ತಳವಾರ (9480803668)
- ಪಿಎಸ್ಐ: ಶ್ರೀ ಲಚ್ಚಪ್ಪ ಚವ್ಹಾಣ (9480803667 / 8747074213)
- ಉಪ ವಿಭಾಗ ಎಇಇ: ಶ್ರೀ ಪರಶುರಾಮ್ (9741134999)
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದಾದ ಅಧಿಕಾರಿಗಳು:
- ಹೋಬಳಿ ಕಂದಾಯ ನಿರೀಕ್ಷಕರು: ಶ್ರೀ ಗಿರೀಶ್ (9964702225)
- ಗ್ರಾಮ ಆಡಳಿತಾಧಿಕಾರಿ: ಶ್ರೀ ಮಲ್ಲಿಕಾರ್ಜುನ ಈಟಿ (9611121143)
ಜಿಲ್ಲಾಧಿಕಾರಿಗಳ ಸೂಚನೆಯಂತೆ, ನಿಯೋಜನೆಗೊಂಡ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಕರ್ತವ್ಯ ನಿರ್ಲಕ್ಷಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಮಾಕ್ ಡ್ರಿಲ್ ಮೂಲಕ ಸಾರ್ವಜನಿಕರಲ್ಲಿ ಭೀತಿಯಿಲ್ಲದ ನಿಶ್ಚಿಂತತೆಯೊಂದಿಗೆ ರಕ್ಷಣಾತ್ಮಕ ಚಟುವಟಿಕೆಗಳ ಅರಿವು ಮೂಡಿಸಲು ಜಿಲ್ಲಾಡಳಿತ ಬದ್ಧವಾಗಿದೆ.
ಸಾರ್ವಜನಿಕರ ಸಹಕಾರವೂ ಈ ಕಾರ್ಯಕ್ರಮದ ಯಶಸ್ಸಿಗೆ ಮುಖ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

