Sun. Jul 20th, 2025

ಹೆಣ್ಣುಮಕ್ಕಳಿಗೆ ಜಮೀನು ನೀಡಲು ಮುಂದಾದ ತಂದೆ; ಕೋಪಗೊಂಡ ಮಗನಿಂದಲೇ ಕೊಲೆ!

ಹೆಣ್ಣುಮಕ್ಕಳಿಗೆ ಜಮೀನು ನೀಡಲು ಮುಂದಾದ ತಂದೆ; ಕೋಪಗೊಂಡ ಮಗನಿಂದಲೇ ಕೊಲೆ!

ಶಹಾಪುರ:

ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಹಳಿಸಗರ ಗ್ರಾಮದಲ್ಲಿ ಘಟನೆ ನಡೆದಿದ್ದು, ಕುಟುಂಬದ ಆಸ್ತಿ ವಿವಾದ ತೀವ್ರ ರೂಪ ಪಡೆದ ಪರಿಣಾಮ, ಪುತ್ರನೇ ತಂದೆಯನ್ನು ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ಮಡ್ನಾಳ ಕ್ಯಾಂಪ್ ಬಳಿ ಶನಿವಾರ ವರದಿಯಾಗಿದೆ.

ಘಟನೆಯಲ್ಲಿ ಸಾವಿಗೀಡಾದವರು ಹಳಿಸಗರ ಗ್ರಾಮದ ನಿವಾಸಿ ವೆಂಕಪ್ಪ (60) ಎಂಬವರು. ಆರೋಪಿಯಾಗಿರುವವನ ಹೆಸರು ನಾಗಪ್ಪ – ಇವರೇ ಮೃತನ ಪುತ್ರ. ಜಮೀನು ಹಂಚಿಕೆಯ ವಿಚಾರವಾಗಿ ತಂದೆ–ಮಗನ ನಡುವೆ ಇಂದು ಜಗಳ ಉಂಟಾಗಿ, ವಿಷಯ ಕೊಲೆಯ ತನಕ ತಲುಪಿದೆ.

ತಂದೆ ವೆಂಕಪ್ಪ ಅವರು ತಮ್ಮ ಹೆಣ್ಣುಮಕ್ಕಳಿಗೂ ಜಮೀನಿನಲ್ಲಿ ಸಮಾನ ಹಕ್ಕು ನೀಡುವ ಉದ್ದೇಶ ಹೊಂದಿದ್ದರು. ಈ ವಿಚಾರವನ್ನು ವಿರೋಧಿಸಿದ್ದ ಮಗ ನಾಗಪ್ಪ, ತಮ್ಮ ಭಾವನೆಗಳನ್ನು ತೀವ್ರವಾಗಿ ವ್ಯಕ್ತಪಡಿಸಿ ಕಿರಿಕ್ ಮಾಡಿದ್ದಾನೆ. ತಂದೆಯ ಮಾತು ಕೇಳದೆ ಕೋಪಗೊಂಡ ನಾಗಪ್ಪ, ಸ್ಥಳದಲ್ಲೇ ಇದ್ದ ಕೊಡಲಿಯನ್ನು ಬಳಸಿಕೊಂಡು ತಂದೆಯ ತಲೆಗೆ ಹೊಡೆದು, ಅವರನ್ನೇ ಹತ್ಯೆಗೈದಿದ್ದಾನೆ.

ಕೃತ್ಯ ನೇರವೇರಿಸಿದ ಬಳಿಕ, ಅಣ್ಣನಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ ನಂತರ ಸ್ವತಃ ಭೀಮರಾಯನಗುಡಿ ಪೊಲೀಸ್ ಠಾಣೆಗೆ ತೆರಳಿ ಶರಣಾದನು. ಘಟನೆ ನಡೆದ ಸ್ಥಳಕ್ಕೆ ಭೀಮರಾಯನಗುಡಿ ಠಾಣೆಯ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಪೋಸ್ಟ್‌ಮಾರ್ಟಂಗಾಗಿ ಶಹಾಪುರ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು.

ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!