ಯಾದಗಿರಿ, ಡಿ ೩೧:– ಯಾದಗಿರಿ ನಗರದ ಕೇಂದ್ರ ಬೀಡಿ ಕಾರ್ಮಿಕರ ಆಸ್ಪತ್ರೆ ಹೆಸರು ಮಾತ್ರ ಬೆಳಕಿನಲ್ಲಿದೆ, ಆದರೆ ಬಡ ಬೀಡಿ ಕಾರ್ಮಿಕರ ಸಮಸ್ಯೆಗಳಿಗೆ ಇದು ಯಾವುದೇ ಪರಿಹಾರ ನೀಡುತ್ತಿಲ್ಲ ಎಂಬ ಆರೋಪಗಳು ಎದ್ದಿವೆ. ಅನೇಕ ಬೀಡಿ ಕಾರ್ಮಿಕರು ಮತ್ತು ಅವರ ಕುಟುಂಬಗಳು ದಿನನಿತ್ಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಈ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆ ಕ್ಲೋಸ್ ಕ್ಲೋಸ್!
ರೋಗಿಗಳ ಗುಂಪು ಆಸ್ಪತ್ರೆ ಬಾಗಿಲಿಗೆ ಆಗಾಗ ತೆರಳಿದರೂ, “ಕ್ಲೋಸ್ ಕ್ಲೋಸ್” ಎಂಬ ಬೋರ್ಡ್ ಮಾತ್ರ ಎದುರಾಗುತ್ತಿದೆ. ಕೆಲವೊಮ್ಮೆ ವೈದ್ಯರು ಇದ್ದರೂ, ಅವರಿಗೆ ಸರಿಯಾದ ಔಷಧಿಗಳ ಪೂರೈಕೆ ಇಲ್ಲ. “ಕ್ಯಾನ್ಸರ್ ಬಂದರೂ ಒಂದೇ ಮಾತ್ರೆ, ಜ್ವರ ಬಂದರೂ ಒಂದೇ ಮಾತ್ರೆ!” ಎಂಬ ದೂರುಗಳನ್ನು ಕಾರ್ಮಿಕರು ಕೇಳಿಸುತ್ತಿದ್ದಾರೆ.
ಕಾರ್ಮಿಕರ ದುರಂತ ಬದುಕು
ಬೀಡಿ ಕಟ್ಟುವುದು ಎಂಬುದು ಯಾದಗಿರಿ ನಗರದಲ್ಲಿ ಅನೇಕ ಕುಟುಂಬಗಳ ಆದಾಯದ ಪ್ರಮುಖ ಮೂಲ. ಮಹಿಳೆಯರು ದಿನನಿತ್ಯ ಮನೆ ಕೆಲಸ ಮುಗಿಸಿಕೊಂಡು ಸುಮಾರು 1000 ಬೀಡಿಗಳನ್ನು ಕಟ್ಟುತ್ತಾರೆ. ಆದರೆ, ಇದಕ್ಕಾಗಿ ಅವರಿಗೆ ದೊರೆಯುವ ರೂ.180 ಮಾತ್ರ ಜೀವನ ಸಾಗಿಸಲು ಸಾಕಾಗುತ್ತಿಲ್ಲ. ಆರೋಗ್ಯ ಸಮಸ್ಯೆ ಬಂದಾಗ ಈ ಪೈಸೆಯಲ್ಲೇ ಖಾಸಗಿ ಆಸ್ಪತ್ರೆಗಳಿಗೆ ಹೋಗುವುದು ಅವರ ಬಡ್ತಿ ಅಲ್ಲ. ದೇವರೇ ನಮ್ಮ ನೆರವಿಗೆ ಬರಬೇಕು,” ಎಂಬ ನೋವುಕಾರಿಯಾದ ಮಾತುಗಳು ಇಲ್ಲಿ ಕೇಳಿ ಬರುತ್ತವೆ.
ಆಸ್ಪತ್ರೆಯ ನಿರ್ವಹಣೆಯಲ್ಲಿ ಲೋಪ
ಆಸ್ಪತ್ರೆಯಲ್ಲಿ ಅಂಬ್ಯುಲೆನ್ಸ್, ಸಿಬ್ಬಂದಿ, ಮತ್ತು ಬೇಸಿಕ್ ಇನ್ಫ್ರಾಸ್ಟ್ರಕ್ಚರ್ ಇದ್ದರೂ, ನಿರ್ವಹಣೆ ಸಂಪೂರ್ಣ ಲೋಪವಾಗಿದೆ. ಬೀಡಿ ಕಾರ್ಮಿಕರಿಗೆ ಉಸಿರಾಟದ ಸಮಸ್ಯೆ, ಕ್ಯಾನ್ಸರ್, ಮತ್ತು ಹೃದಯಾಘಾತದಂತಹ ತೀವ್ರ ಖಾಯಿಲೆಗಳು ಸಾಮಾನ್ಯವಾಗಿದೆ. ಈ ಸ್ಥಿತಿಯಲ್ಲಿ ಸೂಕ್ತ ವೈದ್ಯಕೀಯ ಸೇವೆ ನೀಡಲು ಆಸ್ಪತ್ರೆಯು ವಿಫಲವಾಗಿದೆ.
ಸರ್ಕಾರ ಮತ್ತು ಆಸ್ಪತ್ರೆಯ ಮೇಲಿನ ಕಠಿಣ ಪ್ರಶ್ನೆಗಳು
ಸರ್ಕಾರ ಈ ಆಸ್ಪತ್ರೆಯನ್ನು ಕಾರ್ಮಿಕರ ಆರೋಗ್ಯ ಸುರಕ್ಷತೆಗಾಗಿ ಸ್ಥಾಪಿಸಿತ್ತು. ಆದರೆ, ಬಡ ರೈತರು ಹಾಗೂ ಕಾರ್ಮಿಕರ ದೈನಂದಿನ ಆರೋಗ್ಯ ಸಮಸ್ಯೆಗಳಿಗೆ ಯೋಗ್ಯ ಪರಿಹಾರ ಸಿಗದೇ ಇರುವ ಸ್ಥಿತಿಯನ್ನು ತಕ್ಷಣ ಸರಿಪಡಿಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದ್ದಾರೆ. ವೈದ್ಯರು ಸರಿಯಾಗಿ ಸಮಯಕ್ಕೆ ಹಾಜರಾಗುವಂತೆ ಮತ್ತು ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಕಾರ್ಮಿಕರಿಗೆ ಸಮರ್ಪಕವಾಗಿ ತಲುಪುವಂತೆ ನೋಡಿಕೊಳ್ಳುವ ಅವಶ್ಯಕತೆಯಿದೆ.
ಕಾರ್ಮಿಕರ ಮನವಿ
“ನಮ್ಮ ಆರೋಗ್ಯವನ್ನು ಕಾಪಾಡಲು ಮತ್ತು ಮಕ್ಕಳ ಭವಿಷ್ಯವನ್ನು ಉಳಿಸಲು ನಾವು ಸರ್ಕಾರದಿಂದ ಸೂಕ್ತ ನೆರವಿಗಾಗಿ ಕಾಯುತ್ತೇವೆ,” ಎಂಬುದು ಬೀಡಿ ಕಾರ್ಮಿಕರ ಎದೆಯ ಮಾತು. ಈ ಸಮಸ್ಯೆಗೆ ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳದಿದ್ದರೆ, ಅವರ ನಂಬಿಕೆಗಳನ್ನು ಕಳೆದುಕೊಳ್ಳುವ ಅಪಾಯದ ಮುನ್ಸೂಚನೆ ಇದೆ.
- ಆರು ತಿಂಗಳಿಂದ ಕಮಿಷನ್ ಬಾಕಿ — ನವೆಂಬರ್ ಪಡಿತರ ಎತ್ತುವಳಿ ನಿಲ್ಲಿಸಲು ವಿತರಕರ ಸಂಘದ ಎಚ್ಚರಿಕೆ
- ಯಾದಗಿರಿ ರೈತರಿಗೆ ಭಾರತ ಮಾಲಾ ಯೋಜನೆ ಬಾಧೆ — ಪರಿಹಾರ ಧನ ಹಾಗೂ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಡಾ. ಭೀಮಣ್ಣ ಮೇಟಿ ಆಗ್ರಹ
- ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ; ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಲ್ಲಪ್ಪ ಸಂಕೀನ್ ನಾಮಪತ್ರ ಸಲ್ಲಿಕೆ
- ಹಿರಿಯ ರಂಗಭೂಮಿ ಕಲಾವಿದ ಮತ್ತು ಹಾಸ್ಯನಟ ರಾಜು ತಾಳಿಕೋಟಿ ಹೃದಯಾಘಾತದಿಂದ ನಿಧನ
- ಸಾರ್ವಜನಿಕ–ಅಧಿಕಾರಿ ಸಂವಾದ ಅಗತ್ಯ: RTI ಕಾಯ್ದೆ ಪರಿಣಾಮಕಾರಿತ್ವಕ್ಕೆ ಆಯುಕ್ತ ಬದ್ರುದ್ದೀನ್ ಕರೆ

