Sun. Jul 20th, 2025

ಪತ್ನಿಯೇ ನದಿಗೆ ತಳ್ಳಿದ್ದಾಳೆಂದು ಆರೋಪಿಸಿದ್ದ ತಾತಪ್ಪನಿಗೆ ಮತ್ತೊಂದು ಶಾಕ್: ಬಾಲ್ಯವಿವಾಹ ಆರೋಪದಲ್ಲಿ ಸಂಕಷ್ಟ

ಪತ್ನಿಯೇ ನದಿಗೆ ತಳ್ಳಿದ್ದಾಳೆಂದು ಆರೋಪಿಸಿದ್ದ ತಾತಪ್ಪನಿಗೆ ಮತ್ತೊಂದು ಶಾಕ್: ಬಾಲ್ಯವಿವಾಹ ಆರೋಪದಲ್ಲಿ ಸಂಕಷ್ಟ

ರಾಯಚೂರು, ಜುಲೈ 20

–ಯುವಕನೊಬ್ಬ ಕೃಷ್ಣಾ ನದಿಗೆ ಬಿದ್ದಿರುವ ಹೃದಯವಿದ್ರಾವಕ ವಿಡಿಯೋ ಒಂದು ವಾರದೊಳಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಈ ಪ್ರಕರಣಕ್ಕೆ ಈಗ ತೀವ್ರ ಗಂಭೀರ ತಿರುವು ಸಿಕ್ಕಿದೆ. ಆರಂಭದಲ್ಲಿ, ಪತ್ನಿಯೇ ಪತಿಯನ್ನು ನದಿಗೆ ತಳ್ಳಿದರೆಂಬ ಆರೋಪಗಳು ಬೆಳಕಿಗೆ ಬಂದಿದ್ದು, ಪತಿ ತಾತಪ್ಪ ಗಂಭೀರವಾಗಿ ಗದ್ದೆಮ್ಮಳ ವಿರುದ್ಧ ಕೊಲೆ ಯತ್ನದ ಆರೋಪ ಮಾಡಿದ್ದ.

ಈ ನಡುವೆಯೇ, ತಾತಪ್ಪ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ ಎಂಬ ಮಾಹಿತಿ ಕೂಡ ಲಭ್ಯವಾಗಿತ್ತು. ಆದರೆ ಈಗ ಇದೇ ಪ್ರಕರಣಕ್ಕೆ ನೂತನ ಬೆಳಕು ಸಿಕ್ಕಿದ್ದು, ತಾತಪ್ಪನ ವಿರುದ್ಧವೇ ಗಂಭೀರ ಆರೋಪಗಳು ಕೇಳಿಬಂದಿವೆ.

ಬಾಲ್ಯವಿವಾಹದ ಸಂಶಯ:
ಯಾದಗಿರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ರಕ್ಷಣಾ ಘಟಕ ತನಿಖೆ ನಡೆಸಿದಾಗ ಪತ್ನಿ ಗದ್ದೆಮ್ಮಳ ವಯಸ್ಸು ಕೇವಲ 15 ವರ್ಷ 8 ತಿಂಗಳು ಎಂಬ ಮಾಹಿತಿ ಶಾಲಾ ದಾಖಲೆಗಳ ಮೂಲಕ ದೃಢಪಟ್ಟಿದೆ. ಈ ಆಧಾರದ ಮೇಲೆ ತಾತಪ್ಪ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿರುವುದು ಬಹಿರಂಗವಾಗಿದೆ.

ಈ ಸಂಬಂಧ ಯಾದಗಿರಿ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಕ್ಕಳ ರಕ್ಷಣಾಧಿಕಾರಿಗಳಿಗೆ ಅಧಿಕೃತ ಪತ್ರವೂ ಕಳಿಸಲಾಗಿದೆ. ರಾಯಚೂರು ಜಿಲ್ಲಾಧಿಕಾರಿ, ಸಿಡಿಪಿಒ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ತಾತಪ್ಪನ ಮನೆಗೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ದಾಖಲೆ ಒದಗಿಸದ ತಾತಪ್ಪ ಕುಟುಂಬ:
ತಾತಪ್ಪ ಕುಟುಂಬವು ಯಾವುದೇ ಲಿಖಿತ ದಾಖಲೆಗಳನ್ನು ನೀಡದೆ ಕೇವಲ ಮೌಖಿಕವಾಗಿ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಗದ್ದೆಮ್ಮಳ ವಯಸ್ಸು ಕುರಿತ ದಾಖಲೆಗಳನ್ನು ನೀಡುವಂತೆ ತಾತಪ್ಪನಿಗೆ ಜುಲೈ 21ರವರೆಗೆ ಸಮಯ ನೀಡಿದ್ದಾರೆ.

ದಾಖಲೆಗಳಿಲ್ಲದಿದ್ದರೆ ಎಫ್‌ಐಆರ್:
ನಿಗದಿತ ಸಮಯದೊಳಗೆ ದಾಖಲೆಗಳು ಸಲ್ಲಿಸಲಿಲ್ಲವಾದರೆ, ತಾತಪ್ಪ ಮತ್ತು ಕುಟುಂಬಸ್ಥರ ವಿರುದ್ಧ ಬಾಲ್ಯವಿವಾಹ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗುವುದು ಎಂಬ ಸೂಚನೆ ನೀಡಲಾಗಿದೆ.

ಈಗಾಗಲೇ ಕೊಲೆ ಯತ್ನದ ಆರೋಪದ ಹಿನ್ನೆಲೆ ಹಿನ್ನಲೆಯಲ್ಲಿ ತಾತಪ್ಪ ವಿವಾದದ ಕೇಂದ್ರಬಿಂದುವಾಗಿದ್ದು, ಇದೀಗ ಬಾಲ್ಯವಿವಾಹ ಆರೋಪವೂ ಸೇರಿ ಪ್ರಕರಣ ಮತ್ತಷ್ಟು ಗಂಭೀರತೆ ಪಡೆದುಕೊಂಡಿದೆ.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!