Tue. Jul 22nd, 2025

ಸುರಪುರದಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಯುವಕರ ಹುಚ್ಚಾಟ: ಎಕೆ-47 ಮಾದರಿಯ ಕಬ್ಬಿಣದ ಪೈಪ್ನಿಂದ ಪಟಾಕಿ ಸಿಡಿಸಿ ಉದ್ದಟತನ

ಸುರಪುರದಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಯುವಕರ ಹುಚ್ಚಾಟ: ಎಕೆ-47 ಮಾದರಿಯ ಕಬ್ಬಿಣದ ಪೈಪ್ನಿಂದ ಪಟಾಕಿ ಸಿಡಿಸಿ ಉದ್ದಟತನ

ಯಾದಗಿರಿ ಸೆ ೧೭:

ಸುರಪುರ ಪಟ್ಟಣದಲ್ಲಿ ನಡೆದ ಈದ್ ಮಿಲಾದ್ ಹಬ್ಬದ ಮೆರವಣಿಗೆಯ ಸಮಯದಲ್ಲಿ ಮುಸ್ಲಿಂ ಯುವಕರ ಗುಂಪೊಂದು ಕಾನೂನು ಉಲ್ಲಂಘನೆ ಮಾಡಿರುವ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಎಕೆ-47 ಮಾದರಿಯ ಕಬ್ಬಿಣದ ಪೈಪ್ನ ಮೂಲಕ ಪಟಾಕಿ ಸಿಡಿಸಿ, ಹಬ್ಬದ ಹರ್ಷದಲ್ಲಿ ಯುವಕರು ಗದ್ದಲವನ್ನೇ ಸೃಷ್ಟಿಸಿದರು.

ಮೆರವಣಿಗೆ ನಡೆಯುತ್ತಿದ್ದ ಸಮಯದಲ್ಲಿ, ಕಬ್ಬಿಣದ ಪೈಪ್ನ ಒಳಗೆ ಪಟಾಕಿ ಮದ್ದು ಹಾಕಿ ಆಕಾಶದತ್ತ ತೋರಿಸುತ್ತಾ, “ಅಲ್ಲಾಹು ಅಕ್ಬರ್” ಎಂದು ಘೋಷಣೆ ಕೂಗಿದ ಯುವಕರು, ಸಾರ್ವಜನಿಕರ ಎದುರಲ್ಲೇ ಮದ್ದು ಸಿಡಿಸಿದರು. ಒಂದು ಬಾರಿ ಅಲ್ಲ, ಐದಾರು ಬಾರಿ ಮದ್ದು ಹಾರಿಸುವ ಮೂಲಕ ಅವರು ಪರಿಸರದಲ್ಲಿ ಭಯ ಹಾಗೂ ಆತಂಕ ಹುಟ್ಟಿಸಿದರು.

ಘಟನೆಯಾದ ಸಂದರ್ಭದಲ್ಲಿ, ಸ್ಥಳೀಯರು ಹಾಗೂ ಮೆರವಣಿಗೆಯ ಭಾಗಿಯಾಗಿದ್ದ ಕೆಲವು ಮುಸ್ಲಿಂ ಮುಖಂಡರು ಯುವಕರಿಗೆ ತಡೆಹಿಡಿಯಲು ಪ್ರಯತ್ನಿಸಿದರೂ, ಅವರು ನಿರ್ಲಕ್ಷ್ಯದಿಂದ ವರ್ತಿಸಿದರು. ಈ ಕೃತ್ಯ ಸ್ಥಳೀಯ ಜನರ ನಡುವೆ ಭಾರೀ ಆತಂಕವನ್ನು ಉಂಟುಮಾಡಿದ್ದು, ಹಲವಾರು ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ತಕ್ಷಣವೇ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಯಿತು.

ಮೆರವಣಿಗೆಯ ಭದ್ರತೆಗೆ ನಿಯೋಜಿತ ಇದ್ದ ಪೊಲೀಸರು ಕೂಡಾ ಈ ಘಟನೆಗೆ ಗಮನಹರಿಸಿದರು. ಆದರೆ ಮೆರವಣಿಗೆಯ ಮಧ್ಯದಲ್ಲಿ ಈ ಘಟನೆ ನಡೆದ ಕಾರಣ, ತಕ್ಷಣವೇ ಕಾರ್ಯಾಚರಣೆಗೆ ಇಳಿಯಲು ಕೆಲವು ಸಮಯ ತೆಗೆದುಕೊಳ್ಳಲಾಯಿತು. ಈ ನಡುವೆ, ಸಾಮಾಜಿಕ ಮಾಧ್ಯಮಗಳಲ್ಲಿ ಘಟನೆಯ ವೀಡಿಯೋ ಕ್ಲಿಪ್‌ಗಳು ಹರಿದಾಡಲಾರಂಭಿಸಿವೆ.

ಸಾರ್ವಜನಿಕರು ಈ ಘಟನೆಗೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಮುಸ್ಲಿಂ ಸಮುದಾಯದ ಹಿರಿಯರು ಈ ಉದ್ದಟತನವನ್ನು ತೀವ್ರವಾಗಿ ಖಂಡಿಸಿದ್ದಾರೆ. “ಹಬ್ಬದ ಸಂಭ್ರಮದಲ್ಲಿ ಇಂತಹ ಕೃತ್ಯಗಳು ನಮ್ಮ ಸಮಾಜಕ್ಕೆ ನೋವು ನೀಡುತ್ತವೆ,” ಎಂದು ಕೆಲವು ಮುಖಂಡರು ಹೇಳಿದರು.

ಸಮಾರಂಭಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಲು ಪೊಲೀಸರು ಕ್ರಮ ಕೈಗೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಯುವಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆದಿದೆ.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!